Posts

Showing posts from August, 2017

೫೪. ಲಂಕೆಯಲ್ಲಿ ಸೀತೆ

ತ್ವಯಾ ಏವ ಸೂನಂ ದುಷ್ಟಾತ್ಮನ್ ಭೀರುಣಾಹರ್ತುಂ ಇಚ್ಛತಾ ಮಮ ಅಪವಾಹಿತೋ ಭರ್ತಾ ಮೃಗ ರೂಪೇಣ ಮಾಯಯಾ ವಿಮಾನದಲ್ಲಿ ಹೋಗುತ್ತಿದ್ದಾಗ ಸೀತೆ ರಾವಣನಿಗೆ , " ನೀನು ಮಾಯಾಮೃಗವನ್ನು ಸೃಷ್ಟಿಸಿ , ನನ್ನ ಗಂಡನನ್ನು ದೂರ ಹೋಗುವಂತೆ ಮಾಡಿ ಒಬ್ಬಳೇ ಇದ್ದ ನನ್ನನ್ನು ಅಪಹರಿಸಿರುವೆ . ಇದು ಯಾವ ಮಹಾ ಕೆಲಸ ? ಇದು ಆಕಸ್ಮಿಕವೂ ಅಲ್ಲ . ನಿನ್ನ ಪೂರ್ವ ನಿಯೋಜಿತ ಸಂಚು . ನಿನ್ನ ಈ ಕೆಲಸ ನಿನ್ನ ಪರಾಕ್ರಮಕ್ಕೆ , ನಿನ್ನ ತಪಸ್ಸಿಗೆ , ನಿನ್ನ ಜೀವನಕ್ಕೆ ಒಂದು ನಿದರ್ಶನವಾಗಿ ನಿಲ್ಲುತ್ತದೆ . ಒಬ್ಬ ಪರಸ್ತ್ರೀಯನ್ನು ಹೊತ್ತುಕೊಂಡು ಬರುವುದಕ್ಕೆ ನಿನಗೆ ನಾಚಿಕೆಯಾಗುವುದಿಲ್ಲವೇ ? ನೀನು ನಿಜವಾಗಿಯೂ ಪರಾಕ್ರಮಿಯೇ ಆದರೆ ರಾಮನಿದ್ದಾಗ ಬರುತ್ತಿದ್ದೆ . ನೀನು ಮಾಡಿದ ಕೆಲಸವನ್ನು ಹಿರಿಯರು , ವೀರರು ಅಂಗೀಕರಿಸರು . ನನ್ನನ್ನು ಅನುಭವಿಸುವುದು ನಿನಗೆ ಈ ಜನ್ಮದಲ್ಲಿ ಸಾಧ್ಯವಿಲ್ಲ . ನೀನು ಸತ್ತ ಮೇಲೆ ನಿನ್ನನ್ನು ನರಕಕ್ಕೆ ಕರೆದೊಯ್ದು ಕೀವು ರಕ್ತದಿಂದ ಕೊಡಿದ ಅಸೀಪತ್ರವನದಲ್ಲಿ ಹಾಕುತ್ತಾರೆ . ಘೋರ ವೈತರಣೀ ನದಿಯಲ್ಲಿ ಬಿಸಾಡುತ್ತಾರೆ . ಇಂದು ನನ್ನನ್ನು ಹಿಡಿದೆಯೆಂದು ಸಂತೋಷಪಡಬಹುದು . ಆದರೆ ನಾಳೆ ನಿನ್ನನ್ನು ಮೈಯೆಲ್ಲಾ ಶೂಲಗಳಿಂದಿರುವ ಶಾಲ್ಮಲೀ ವೃಕ್ಷವನ್ನು ತಬ್ಬಿಕೊಳ್ಳುವಂತೆ ಮಾಡುತ್ತಾರೆ . ಕಾಲ ನಿನ್ನನ್ನು ಪಾಶಗಳಿಂದ ಹಿಡಿದಿಡುತ್ತದೆ...

೫೩. ಸೀತಾಪಹರಣ

ಲಕ್ಷ್ಮಣ ಹೋಗುವುದನ್ನೇ ಕಾಯುತ್ತಿದ್ದ ರಾವಣ, ಅವನು ಕಣ್ಣಿಗೆ ಕಾಣದಷ್ಟು ದೂರ ಹೋದಮೇಲೆ ತನ್ನ ರಥದಿಂದ ಇಳಿ ಕಾಮ ರೂಪವನ್ನು ಪಡೆದ. ಮೃದುವಾದ ಕಾಷಾಯ ವಸ್ತ್ರ, ಜುಟ್ಟು, ಯಜ್ಞೋಪವೀತ, ಎಡ ಭುಜಕ್ಕೆ ಕಮಂಡಲಗಳನ್ನು ಧರಿಸಿ, ದಿವ್ಯ ತೇಜಸ್ಸನ್ನು ಪಡೆದು ಪರಿವ್ರಾಜಕ (ಸಾಧು) ವೇಷದಿಂದ ಆಶ್ರಮದ ಕಡೆ ಹೋದ. ಮಾರುವೇಷದಲ್ಲಿದ್ದ ರಾವಣನನ್ನು ಗುರುತಿಸಿದ ಅಲ್ಲಿದ್ದ ಗಿಡಗಳು ಅಲ್ಲಾಡದೆ ಹಾಗೇ ನಿಂತುಬಿಟ್ಟವು. ಗಾಳಿ ಮಂದವಾಗಿ ಬೀಸಿತು. ರಾವಣ ಒಮ್ಮೆ ತನ್ನ ತನ್ನ ದೃಷ್ಟಿಯನ್ನು ತಿರುಗಿಸಿದಾಗ ಅಲ್ಲಿಯವರೆಗೂ ರಭಸದಿಂದ ಹರಿಯುತ್ತಿದ್ದ ಗೋದಾವರಿ ಮೆಲ್ಲಗಾದಳು. ರಾವಣ ಸೀತೆಯ ಬಳಿ ಬಂದು, "ನಿನ್ನ ಪದ್ಮದಂತಹ ಮುಖ, ಕೈ, ಪಾದಗಳನ್ನು ನೋಡಿದರೆ ಭೂಮಿಯ ಮೇಲೆ ತಿರುಗಲು ಬಂದ ರತಿಯಂತೆ ಕಾಣಿಸುತ್ತಿರುವೆ. ನಿನ್ನ ಮುಖ, ನಿನ್ನ ಕಣ್ಣು ಎಲ್ಲ ಸುಂದರವಾಗಿವೆ..." ಎಂದು ಸೀತೆಯ ಕೇಶದಿಂದ ಪಾದದವರೆಗೂ ಪ್ರತಿಯೊಂದು ಅಂಗಾಂಗಗಳನ್ನೂ ವರ್ಣಿಸಿ, "ವೇಗವಾಗಿ ಓಡುವ ನದಿ ತನ್ನ ದಡವನ್ನು ಕೊರೆದಂತೆ ನೀನು ನನ್ನ ಮನಸ್ಸನ್ನು ಕೊರೆಯುತ್ತಿದ್ದೀಯ! ಯಕ್ಷ, ಗಂಧರ್ವ, ಕಿನ್ನರ ಸ್ತ್ರೀಯರಲ್ಲಿ ನಿನ್ನಂತಹ ರೂಪವತಿಯನ್ನು ನನ್ನ ಎಲ್ಲಿಯೂ ನೋಡಿಲ್ಲ. ನಿನ್ನಂತಹವಳು ಕಾಡಿನಲ್ಲಿರುವುದೇಕೆ? ಇದು ಕ್ರೂರ ಮೃಗಗಳಿರುವ ಕಾಡು. ಇಲ್ಲಿ ರಾಕ್ಷಸರು ಕಾಮರೂಪದಿಂದ ತಿರುಗುತ್ತಿರುತ್ತಾರೆ. ಇಲ್ಲಿಂದ ನೀನು ಬೇಗ ಹೊರಡು. ನೀನು ದೊಡ್ಡ ನಗರದಲ್ಲಿದ್ದು ಸುಖಪಡಬೇಕು. ...

೫೨. ಸಂದೇಹ!

ರಾವಣ ಮಾರೀಚರು ರಥದಲ್ಲಿ ಬಂದು ಆಶ್ರಮದ ಬಳಿ ಇಳಿದರು . ತಕ್ಷಣ ಮಾರೀಚ ಜಿಂಕೆಯಾಗಿ ಬದಲಾದ . ಜಿಂಕೆಯ ಮೈಯೆಲ್ಲಾ ಬಂಗಾರದ ಬಣ್ಣವಾಗಿತ್ತು , ಅದರ ಮೇಲೆ ಬೆಳ್ಳಿ ಚುಕ್ಕೆಗಳು . ಕೊಂಬುಗಳು ಹೊಳೆಯುತ್ತಿದ್ದವು . ಅದರ ಮುಖ ಅರ್ಧ ಕಪ್ಪು , ಅರ್ಧ ಬಿಳಿ ಬಣ್ಣದಲ್ಲಿತ್ತು . ಚಿಕ್ಕ ಕಾಲುಗಳು . ಹೊಟ್ಟೆ ಮುತ್ತಿನಂತೆ ಹೊಳೆಯುತ್ತಿತ್ತು . ಪ್ರಪಂಚದಲ್ಲಿ ಅಲ್ಲಿಯವರೆಗೂ ಎಲ್ಲಿಯೂ ನೋಡಿರದಷ್ಟು ಸುಂದರವಾದ ಜಿಂಕೆಯ ರೂಪವನ್ನು ಪಡೆದು ಮಾರೀಚ ಆಶ್ರಮದೊಳಗೆ ಪ್ರವೇಶಿಸಿದ . ಎಳೆ ಹುಲ್ಲನ್ನು ತಿನ್ನುತ್ತಾ , ಅತ್ತಿತ್ತ ತಿರುಗುತ್ತಾ , ಅಲ್ಲಿದ್ದ ಇತರ ಪ್ರಾಣಿಗಳ ಬಳಿ ಹೋಗಿ ಬರುತ್ತಾ , ಜಿಂಕೆಯಂತೆಯೇ ವರ್ತಿಸಲು ಪ್ರಯತ್ನಿಸುತ್ತಿದ್ದ . ಆದರೆ ಅಲ್ಲಿದ್ದ ಪ್ರಾಣಿಗಳು ಅವನು ರಾಕ್ಷಸನೆಂದು ಗುರುತಿಸಿ ಓಡಿಹೋದವು . ಅದೇ ಸಮಯದಲ್ಲಿ ಸೀತೆ ಹೂಗಳನ್ನು ಕಿತ್ತುಕೊಂಡು ಬರಲು ಅಲ್ಲಿಗೆ ಬಂದಳು . ಕರ್ಣಿಕಾರವ ವೃಕ್ಷದ ಬಳಿ ಹೂ ಕೀಳುತ್ತಿದ್ದಾಗ , ಜಿಂಕೆಯ ರೂಪದಲ್ಲಿದ್ದ ಮಾರೀಚ ಅವಳ ಎದುರಿಗೆ ಬಂದು ನಿಂತ . ಆ ಜಿಂಕೆಯನ್ನು ನೋಡಿದ ಸೀತೆ ರಾಮ ಲಕ್ಷ್ಮಣರನ್ನು ಜೋರಾಗಿ ಕೂಗಿ ಕರೆದು , " ಎದುರಿಗಿರುವ ಜಿಂಕೆಯನ್ನು ನೋಡಿ ! ಎಷ್ಟು ಸುಂದರವಾಗಿದೆ ! ಸೃಷ್ಟಿಯಲ್ಲಿ ಇಂತಹ ಜಿಂಕೆಯನ್ನು ಎಲ್ಲಿಯೂ ನೋಡಿಲ್ಲ . ಆ ಬಂಗಾರ ವರ್ಣದ ಚರ್ಮ , ಬೆಳ್ಳಿ ಚುಕ್ಕೆಗಳ...