೫೪. ಲಂಕೆಯಲ್ಲಿ ಸೀತೆ
ತ್ವಯಾ ಏವ ಸೂನಂ ದುಷ್ಟಾತ್ಮನ್ ಭೀರುಣಾಹರ್ತುಂ ಇಚ್ಛತಾ ಮಮ ಅಪವಾಹಿತೋ ಭರ್ತಾ ಮೃಗ ರೂಪೇಣ ಮಾಯಯಾ ವಿಮಾನದಲ್ಲಿ ಹೋಗುತ್ತಿದ್ದಾಗ ಸೀತೆ ರಾವಣನಿಗೆ , " ನೀನು ಮಾಯಾಮೃಗವನ್ನು ಸೃಷ್ಟಿಸಿ , ನನ್ನ ಗಂಡನನ್ನು ದೂರ ಹೋಗುವಂತೆ ಮಾಡಿ ಒಬ್ಬಳೇ ಇದ್ದ ನನ್ನನ್ನು ಅಪಹರಿಸಿರುವೆ . ಇದು ಯಾವ ಮಹಾ ಕೆಲಸ ? ಇದು ಆಕಸ್ಮಿಕವೂ ಅಲ್ಲ . ನಿನ್ನ ಪೂರ್ವ ನಿಯೋಜಿತ ಸಂಚು . ನಿನ್ನ ಈ ಕೆಲಸ ನಿನ್ನ ಪರಾಕ್ರಮಕ್ಕೆ , ನಿನ್ನ ತಪಸ್ಸಿಗೆ , ನಿನ್ನ ಜೀವನಕ್ಕೆ ಒಂದು ನಿದರ್ಶನವಾಗಿ ನಿಲ್ಲುತ್ತದೆ . ಒಬ್ಬ ಪರಸ್ತ್ರೀಯನ್ನು ಹೊತ್ತುಕೊಂಡು ಬರುವುದಕ್ಕೆ ನಿನಗೆ ನಾಚಿಕೆಯಾಗುವುದಿಲ್ಲವೇ ? ನೀನು ನಿಜವಾಗಿಯೂ ಪರಾಕ್ರಮಿಯೇ ಆದರೆ ರಾಮನಿದ್ದಾಗ ಬರುತ್ತಿದ್ದೆ . ನೀನು ಮಾಡಿದ ಕೆಲಸವನ್ನು ಹಿರಿಯರು , ವೀರರು ಅಂಗೀಕರಿಸರು . ನನ್ನನ್ನು ಅನುಭವಿಸುವುದು ನಿನಗೆ ಈ ಜನ್ಮದಲ್ಲಿ ಸಾಧ್ಯವಿಲ್ಲ . ನೀನು ಸತ್ತ ಮೇಲೆ ನಿನ್ನನ್ನು ನರಕಕ್ಕೆ ಕರೆದೊಯ್ದು ಕೀವು ರಕ್ತದಿಂದ ಕೊಡಿದ ಅಸೀಪತ್ರವನದಲ್ಲಿ ಹಾಕುತ್ತಾರೆ . ಘೋರ ವೈತರಣೀ ನದಿಯಲ್ಲಿ ಬಿಸಾಡುತ್ತಾರೆ . ಇಂದು ನನ್ನನ್ನು ಹಿಡಿದೆಯೆಂದು ಸಂತೋಷಪಡಬಹುದು . ಆದರೆ ನಾಳೆ ನಿನ್ನನ್ನು ಮೈಯೆಲ್ಲಾ ಶೂಲಗಳಿಂದಿರುವ ಶಾಲ್ಮಲೀ ವೃಕ್ಷವನ್ನು ತಬ್ಬಿಕೊಳ್ಳುವಂತೆ ಮಾಡುತ್ತಾರೆ . ಕಾಲ ನಿನ್ನನ್ನು ಪಾಶಗಳಿಂದ ಹಿಡಿದಿಡುತ್ತದೆ...