Posts

Showing posts from July, 2017

೨೩. ಪಟ್ಟಾಭಿಷೇಕಕ್ಕೆ ಸಿದ್ಧತೆ

ಚೈತ್ರ ಮಾಸ ಪುಷ್ಯಮಿ ನಕ್ಷತ್ರದಲ್ಲಿ ಚಂದ್ರನಿದ್ದಾಗ ರಾಮನ ಪಟ್ಟಾಭಿಷೇಕವೆಂದು ದಶರಥ ಘೋಷಿಸಿದ. ಸುಮಂತ್ರನನ್ನು ಕರೆದು ರಾಮನನ್ನು ಕರೆತರಲು ಹೇಳಿ, ವಸಿಷ್ಠರಿಗೆ ಪಟ್ಟಾಭಿಷಕಕ್ಕೆ ಏರ್ಪಾಡು ಮಾಡಲು ತಿಳಿಸಿದ. ಪಟ್ಟಾಭಿಷಕದ ಏರ್ಪಾಡುಗಳು ಆರಂಭವಾದವು. ವಸಿಷ್ಠರು ಅಧಿಕಾರಿಗಳನ್ನು ಕರೆದು, “ನೀವು ರತ್ನಗಳನ್ನು, ಶ್ವೇತ ವಸ್ತ್ರಗಳನ್ನು, ಧಾನ್ಯಗಳನ್ನು, ಚದುರಂಗ ಬಲಗಳನ್ನು, ಒಳ್ಳೆಯ ಆನೆಯನ್ನು, ಶ್ವೇತಾಶ್ವವನ್ನು, ಚಾಮರವನ್ನು, ನೂರು ಕುಂಭಗಳನ್ನು, ಸ್ವರ್ಣ ಕೊಂಬುಗಳಿಂದ ಅಲಂಕೃತವಾದ ಎತ್ತನ್ನು, ಪೂರ್ತಿಯಾದ ಹುಲಿ ಚರ್ಮವನ್ನು ಸಿದ್ಧಪಡಿಸಿ ದಶರಥ ಮಹಾರಾಜರ ಅಗ್ನಿ ಗೃಹದಲ್ಲಿಡಿ. ದ್ವಾರಗಳನ್ನು ತೋರಣಗಳಿಂದ ಅಲಂಕರಿಸಿ. ಗಂಧ ಬೆರಸಿದ ನೀರಿನಿಂದ ಹೊಸ್ತಿಲುಗಳನ್ನು ತೊಳಿಯಿರಿ. ಧೂಪವನ್ನು ಹಾಕಿ. ಹಾಲು-ಮೊಸರುಗಳಿಂದ ಕಲಿಸಿದ ಅನ್ನವನ್ನು ಬ್ರಾಹ್ಮಣರಿಗೆ ಸಂತರ್ಪಣೆ ಮಾಡಿ. ಪ್ರತಿ ಮನೆಯ ಮುಂದೆ ಪತಾಕೆಗಳನ್ನು ಹಾರಿಸಿ. ನಾಟಕಕಾರರನ್ನು, ಹಾಡುಗಾರರನ್ನು ಕರೆಸಿ. ವೇಶ್ಯೆಯರು ಅಲಂಕರಿಸಿಕೊಂಡು ಬರಲಿ. ಅವರು ಅರಮನೆಯ ಎರಡೆನೆಯ ಪ್ರಾಂಗಣದವರೆಗೆ ಮಾತ್ರ ಬಂದು ಕಾಯಬೇಕು. ದೇವಾಲಯಗಳಲ್ಲಿ ವಿಶೇಷ ಪೂಜೆ, ಅಭಿಷೇಕಗಳನ್ನು ನೆರವೇರಿಸಿ. ಉದ್ದವಾದ ಕತ್ತಿ ಹಿಡಿದ ವೀರರನ್ನು ತಯಾರಿಸಿ”, ಎಂದು ಆದೇಶಿಸಿದರು. ಸುಮಂತ್ರನು ರಾಮನನ್ನು ಸಭೆಗೆ ಕರೆದುಕೊಂಡು ಬಂದ. ರಾಮ, ತಾನು ರಾಮವರ್ಮನು ಬಂದೆನೆಂದು ಅಭಿವಾದವನ್ನು ಹೆಳಿ, ದಶರಥನ ಪಾದ...

೨೨. ಪಟ್ಟಾಭಿಷೇಕ ನಿರ್ಣಯ

ದಶರಥನ ಕುಮಾರರ ಮದುವೆಗೆ ಭರತನ ಸೋದರಮಾವನಾದ ಯಥಾಜಿತನೂ ಬಂದಿದ್ದ. ಭರತನನ್ನು ಕೆಲವು ದಿನಗಳ ಕಾಲ ತನ್ನ ಮನೆಗೆ ಕರೆದುಕೊಂಡು ಹೊಗಲು ಬಂದಿದ್ದ ಅವನು, ಅಷ್ಟು ಹೊತ್ತಿಗಾಗಲೇ ಭರತ ಮಿಥಿಲೆಗೆ ಹೊರಟ ಸುದ್ದಿ ತಿಳಿದು ತಾನೂ ಮಿಥಿಲೆಗೆ ಹೋಗಿದ್ದ. ರಾಮ, ಲಕ್ಷ್ಮಣ, ಭರತ, ಶತ್ರುಘ್ನರ ವಿವಾಹವನ್ನು ನೋಡಿ ಅವರ ಜೊತೆಯಲ್ಲಿ ಅಯೋಧ್ಯೆಗೆ ಬಂದ. ಕೆಲವು ಕಾಲದ ನಂತರ ಅವನು ಭರತನನ್ನು, ಅವನ ಜೊತೆಯಲ್ಲಿಯೇ ಬಂದ ಶತ್ರುಘ್ನನನ್ನು, ತನ್ನ ಮನೆಗೆ ಕರೆದುಕೊಂಡು ಹೋದ. ಅಲ್ಲಿ ಅವರು ಎಷ್ಟು ಸುಖಗಳನ್ನು ಅನುಭವಿಸಿದರೂ ಯಾವಾಗಲೂ ತನ್ನ ತಂದೆ ದಶರಥನನ್ನೇ ನೆನೆಸಿಕೊಳ್ಳುತ್ತಿದ್ದರು. ನಾಲ್ಕು ಕೈಗಳಂತಿದ್ದ ತನ್ನ ನಾಲ್ಕು ಮಕ್ಕಳಲ್ಲಿ ದಶರಥನಿಗೆ ಎಲ್ಲ ಮಕ್ಕಳ ಮೇಲೂ ಸಮಾನವಾದ ಪ್ರೀತಿಯಿತ್ತು. ನಾಲ್ಕು ಮಕ್ಕಳನ್ನೂ ಸಮಾನವಾದ ದೃಷ್ಠಿಯಿಂದ ನೋಡುತ್ತಿದ್ದ. ಆದರೂ ಅವನಿಗೆ ರಾಮನೆಂದರೆ ಅಪ್ರತಿಮವಾದ ಪ್ರೀತಿ. ಕಾರಣ: ತೇಷಾಮಪಿ ಮಹಾತೇಜಾ ರಾಮೋ ರತಿಕರಃ ಪಿತುಃ ಸ್ವಯಂಭೂರಿವ ಭೂತಾನಾಂ ಬಭೂವ ಗುಣವತ್ತರಃ ರಾಮನಿಗೆ ಇದ್ದ ಗುಣಗಳು. ರಾಮ ಯಾವಾಗಲೂ ಪ್ರಶಾಂತವಾಗಿ, ನಿರ್ಮಲವಾಗಿ ಇರುತ್ತಿದ್ದ, (ಪ್ರಾಣಿಗಳಲ್ಲಿ ಕೆಲವಕ್ಕೆ ಹುಟ್ಟಿನಿಂದ ಕಿವಿ ಕೇಳದಿರಬಹುದು, ಕಣ್ಣು ಕಾಣಿಸದಿರಬಹುದು, ಮಾತು ಬರದಿರಬಹುದು, ಕೈಕಾಲುಗಳು ಇಲ್ಲದಿರಬಹುದು, ಆದರೆ ಕೆಟ್ಟ ಮನಸ್ಸಿನಿಂದ ಯಾರೂ ಹುಟ್ಟುವುದಿಲ್ಲ. ನಮ್ಮ ಮನಸ್ಸುಗಳನ್ನು ನಾವು ಬದಲಾಯಿಸಿಕೊಳ್ಳಬಹುದು, ಹ...

೨೧. ಪರಶುರಾಮ

ಮರುದಿನ ಬೆಳಗ್ಗೆ ವಿಶ್ವಾಮಿತ್ರರು ಎಲ್ಲರನ್ನೂ ಆಶಿರ್ವದಿಸಿ ಉತ್ತರ ದಿಕ್ಕಿಗೆ ಹೊರಟು ಹೋದರು . ಜನಕ ಮಹಾರಾಜ ಆನೆ , ಕುದುರೆ , ವಸ್ತ್ರ , ಮುತ್ತು , ಹವಳ ಮೊದಲಾದ ದ್ರವ್ಯಗಳನ್ನು   ದಶರಥನಿಗೆ ಕಾಣಿಕೆಯಾಗಿ ಕೊಟ್ಟ . ದಶರಥ ತನ್ನ ಪರಿವಾರದೊಂದಿಗೆ ಅಯೋಧ್ಯೆಗೆ ಪ್ರಯಾಣ ಬೆಳೆಸಿದ . ಹೋಗುವ ದಾರಿಯಲ್ಲಿ ಇದ್ದಕ್ಕಿದ್ದಂತೆ ಆಕಾಶದಲ್ಲಿ ಪಕ್ಷಿಗಳ ಭಯಂಕರವಾದ ಕೂಗು ಕೇಳಿಸಿತು.   ಮಬ್ಬು ಮುಸುಕಿತು.   ಮಂಗಳವಾದ ವೃಕ್ಷಗಳು ಕೆಳಗುರುಳಿದವು . ಆದರೆ ಮೃಗಗಳು ಮಾತ್ರ ಪ್ರದಕ್ಷಿಣೆಯಾಗಿ ತಿರುಗುತ್ತಿದ್ದವು . ಇದನ್ನು ಕಂಡ ದಶರಥನಿಗೆ ಭಯವಾಗಿ , ಅಲ್ಲಿನ ಶಕುನಗಳನ್ನು ಕುರಿತು ವಸಿಷ್ಠರನ್ನು ವಿಚಾರಿಸಿದ . ವಸಿಷ್ಠರು , " ಯಾವುದೋ ದೈವೀ ಸಂಬಂಧವಾದ ವಿಪತ್ತು ಬರಲಿದೆ , ಆದರೆ ಮೃಗಗಳು ಪ್ರದಕ್ಷಿಣೆಯಾಗಿ ತಿರುಗುತ್ತಿರುವುದರಿಂದ ನೀನು ಆ ವಿಪತ್ತಿನಿಂದ ಪಾರಾಗುತ್ತೀಯ " ಎಂದರು . ಅಷ್ಟರಲ್ಲಿ ಪ್ರಳಯಕಾಲದ ರುದ್ರನಂತೆ , ವಿಷ್ಣು ಧನಸ್ಸನ್ನು ಹಿಡಿದು ಪರಶುರಾಮರು ಬಂದರು. ರಾಮನಿಗೆ , " ರಾಮ ! ನೀನು ಶಿವಧನಸ್ಸನ್ನು ಮುರಿದೆ ಎಂದು ಕೇಳಿದೆ . ನಿನ್ನ ಬಗ್ಗೆ ಬಹಳಷ್ಟು ಕೇಳಿದ್ದೇನೆ . ನೀನು ಅಷ್ಟು ಶಕ್ತಿವಂತನೇ ಆದರೆ ಈ ವಿಷ್ಣು ಧನಸ್ಸನ್ನು ಹೂಡು " ಎಂದರು . ಈ ಮಾತನ್ನು ಕೇಳಿದ ದಶರಥನು ಭಯಭೀತನಾಗಿ ,...

೨೦. ಸೀತಾಕಲ್ಯಾಣ

ಮರುದಿನ ಬೆಳಿಗ್ಗೆ ದಶರಥ ಮಹಾರಾಜ , ವಿಶ್ವಾಮಿತ್ರರ ಅನುಮತಿ ಪಡೆದು , ಅಲ್ಲಿದ್ದ , ತನಗೆ ಎಷ್ಟೋ ಕಾಲದಿಂದ ಪುರೋಹಿತರಾದ , ತನ್ನ ವಂಶಾಭಿವೃದ್ಧಿಯನ್ನೇ ಬಯಸುವ ವಸಿಷ್ಠರಿಗೆ ತನ್ನ ವಂಶದ ಬಗ್ಗೆ ವಿವರಿಸುವಂತೆ ಕೇಳಿದ . " ಮೊದಲು ಬ್ರಹ್ಮದೇವರು ಹುಟ್ಟಿದರು . ಆ ಬ್ರಹ್ಮನಿಂದ ಮರೀಚಿ , ಮರೀಚಿಗೆ ಕಾಶ್ಯಪ , ಕಾಶ್ಯಪನಿಗೆ ಸೂರ್ಯ , ಸೂರ್ಯನಿಗೆ ಮನು , ಮನುವಿಗೆ ಇಕ್ಷ್ವಾಕು , ಇಕ್ಷ್ವಾಕುವಿಗೆ ಕುಕ್ಷಿ , ಕುಕ್ಷಿಗೆ ವಿಕುಕ್ಷಿ , ವಿಕುಕ್ಷಿಗೆ ಬಾಣ , ಬಾಣನಿಗೆ ಅನರಣ್ಯ , ಅನರಣ್ಯನಿಗೆ ಪೃಥುವ , ಪೃಥುವಿಗೆ ತ್ರಿಶಂಕು , ತ್ರಿಶಂಕುವಿಗೆ ದುಂಧುಮಾರ , ದುಂಧುಮಾರನಿಗೆ ಮಾಂಧಾತ , ಮಾಂಧಾತನಿಗೆ ಸುಸಂಧಿ , ಸುಸಂಧಿಗೆ ಧ್ರುವಸಂಧಿ ಮತ್ತು ಪ್ರಸೇನಜಿತ್ ಎಂಬ ಇಬ್ಬರು ಮಕ್ಕಳು , ಹಿರಿಯನಾದ ಧ್ರುವಸಂಧಿಗೆ ಭರತ , ಭರತನಿಗೆ ಅಸಿತ , ಈ   ಅಸಿತನವರೆಗೂ ರಾಜ್ಯಭಾರ ಮಾಡುತ್ತಾರೆ . ಅಸಿತ ಹೈಹೆಯ , ತಾಲಜಂಘ , ಶಶಬಿಂದ್ವ ಎಂಬ ವಂಶಗಳ ವಿರುದ್ಧ ಯುದ್ಧದಲ್ಲಿ ಸೋತು ತನ್ನ ಇಬ್ಬರು ಪತ್ನಿಯ ಜೊತೆ ಹಿಮಾಲಯಕ್ಕೆ ಹೋಗುತ್ತಾನೆ . ಅಷ್ಟರಲ್ಲೇ ಹಿರಿಯ ಪತ್ನಿ ಗರ್ಭವತಿಯಾಗುತ್ತಾಳೆ . ಕಿರಿಯಳಿಗೆ ಸಂತಾನ ಪ್ರಾಪ್ತವಾಗುವುದಿಲ್ಲ . ಅಸೂಯೆಯಿಂದ ಕಿರಿಯಳು ಹಿರಿಯಳಿಗೆ ವಿಷ ಪ್ರಯೋಗ ಮಾಡುತ್ತಾಳೆ . ಈ ವಿಷಯವನ್ನು ಆಗ ಅಲ್ಲಿಗೆ ಬಂದ ಚ್ಯವನ ಮಹರ್ಷಿ ತಿಳಿಸುತ...

೧೯. ಮಿಥಿಲೆಗೆ ದಶರಥನ ಆಗಮನ

“ಶಿವಧನಸ್ಸನ್ನು ಒಮ್ಮೆ ತರಿಸಿದರೆ ನಮ್ಮ ಮಕ್ಕಳು ಅದನ್ನು ನೋಡುತ್ತಾರೆ”, ಎಂದು ವಿಶ್ವಾಮಿತ್ರರು ಜನಕ ಮಹಾರಾಜನನ್ನು ಕೇಳಿದರು . ಜನಕ ಮಹಾರಾಜ ಅವರ ಕೋರಿಕೆಗೆ ಒಪ್ಪಿದ. ಆಗ ೮ ಚಕ್ರಗಳಿದ್ದ, ಶಿವಧನಸ್ಸಿದ್ದ ಮಂಜೂಷವನ್ನು ಅರಮನೆಯ ಸೇವಕರು ಎಳೆತಂದರು . ಜನಕ ಮಹಾರಾಜ, " ಒಬ್ಬ ಮನುಷ್ಯನು, ಅದೂ ಇನ್ನೂ ಎಳೆವಯಸ್ಸಿನವನು, ಈ ಧನಸ್ಸನ್ನು ಮೇಲೆತ್ತಿ , ಅದಕ್ಕೆ ಹಗ್ಗ ಬಿಗಿಯುವುದು ಸಾಧ್ಯವೇ ? ನೀವು ಕೇಳಿದಿರೆಂದು ತರಿಸಿದ್ದೇನೆ " ಎಂದು ವಿಶ್ವಾಮಿತ್ರರ ಬಳಿ ಸಂಶಯವ್ಯಕ್ತ ಪಡಿಸಿದ . ವಿಶ್ವಾಮಿತ್ರರು ರಾಮನಿಗೆ ಆ ಧನಸ್ಸನ್ನು ಒಮ್ಮೆ ನೋಡಲು ಸೂಚಿಸಿದರು . ರಾಮ ಮಂಜೂಷವನ್ನು ತೆಗೆದು ನೋಡಿದಾಗ , ಶಿವ ಧನಸ್ಸು ಮಲಗಿದ ಹಾವಿನಂತೆ ಕಾಣಿಸಿತು . ಅದನ್ನು ಮುಟ್ಟಿ , ಮೇಲೆತ್ತಿ ವಿಶ್ವಾಮಿತ್ರರ ಅಪ್ಪಣೆಯನ್ನು ಕೇಳಿದ . ವಿಶ್ವಾಮಿತ್ರರು ಅನುಮತಿಸಿ , ಹಾಗೆಯೇ ಧನಸ್ಸನ್ನು ಎತ್ತಿ, ಹೆದೆಯೇರಿಸಲು ಸೂಚಿಸಿದರು . ಆರೋಪಯತ್ ಸ ಧರ್ಮಾತ್ಮಾ ಸ ಲೀಲಂ ಇವ ತತ್ ಧನುಃ | ಆರೋಪಯತ್ವಾಂ ಮೌರ್ವಿಂ ಚ ಪೋರಯಾಮಾಸ ವೀಯವಾನ್ | ತತ್ ಬಭಂಜ ಧನು್ ಮಧ್ಯೇ ನರಶ್ರೇಷ್ಠೋ ಮಹಾಯಶಾಃ || ರಾಮ ಆ ಧನಸ್ಸನ್ನು ಕೊಂಚವೂ ಕಷ್ಟಪಡದೆ ಸರಾಗವಾಗಿ ಎತ್ತಿ , ಅದಕ್ಕೆ ಹಗ್ಗ ಬಿಗಿಯಲು ಯತ್ನಿಸಿದಾಗ , ಅವನ ಸೆಳತಕ್ಕೆ ನಿಧಾನವಾಗಿ...

೧೮. ಸೀತೆ

ಮರುದಿನ ಜನಕ ಮಹಾರಾಜನ ಆಹ್ವಾನದ ಮೇಲೆ ವಿಶ್ವಾಮಿತ್ರರು ರಾಮ - ಲಕ್ಷ್ಮಣರ ಸಹಿತ ರಾಜಸಭೆಗೆ ಬಂದರು . ವಿಶ್ವಾಮಿತ್ರರು ಜನಕ ಮಹಾರಾಜನನ್ನು ಕುರಿತು , " ಇವರಿಬ್ಬರನ್ನು ನಿನ್ನ ಬಳಿಯಿರುವ ಶಿವಧನಸ್ಸನ್ನು ತೋರಿಸಲು ಕರೆದುಕೊಂಡು ಬಂದಿದ್ದೇನೆ . ನೀನು ಒಂದು ಬಾರಿ ತೋರಿಸಿದರೆ ಇವರು ಸಂತೋಷದಿಂದ ಹಿಂತಿರುಗಿ ತಮ್ಮ ಪ್ರಯಾಣ ಮುಂದುವರೆಸುತ್ತಾರೆ " ಎಂದು . ಆಗ ಜನಕಮಹಾರಾಜ ಆ ಶಿವ ಧನಸ್ಸಿನ ಚರಿತ್ರೆಯನ್ನು ಹೇಳಿದ : " ಪೂರ್ವದಲ್ಲಿ ದಕ್ಷ ಪ್ರಜಾಪತಿ ಶಿವನಿಗೆ ಹವಿಸ್ಸು ಕೊಡದ ಯಾಗವನ್ನು ಪ್ರಾರಂಭಿಸಿದ . ಶಿವನಿರದ ಕಡೆ ಮಂಗಳವು ಹೇಗೆ ಇರುತ್ತದೆ ಎಂದು ದಕ್ಷನ ಮಗಳಾದ ಪಾರ್ವತೀದೇವಿ ಯಾಗಾಗ್ನಿಯಲ್ಲಿ ತನ್ನ ದೇಹತ್ಯಾಗ ಮಾಡಿದಳು . ಇದರಿಂದ ಕೋಪಗೊಂಡ ಶಿವ ರೌದ್ರನಾದ . ಇಂತಹ ಯಾಗಕ್ಕೆ ಹೋದ ದೇವತೆಗಳ ಮೇಲೆ ಕೋಪಿಸಿಕೊಂಡು ತನ್ನ ಧನಸ್ಸನ್ನು ಕೈಗೆತ್ತಿಕೊಂಡ . ತಕ್ಷಣವೇ ದೇವತೆಗಳು ಪ್ರಾರ್ಥಿಸಿದಾಗ ಶಿವ   ಶಾಂತಿಸಿದ .  ಆ ಧನಸ್ಸನ್ನು ನನ್ನ ಪೂರ್ವಿಕನಾದ ದೇವರಾತನೆಂಬುವವನ ಬಳಿ ತಾತ್ಕಾಲಿಕವಾಗಿ ಬಿಟ್ಟರು . ದೇವರಾತನು ಆ ಧನಸ್ಸನ್ನು ಒಂದು ಮಂಜೂಷದಲ್ಲಿ ( ಮಂಜೂಷ - ದೊಡ್ಡ ಪೆಟ್ಟಿಗೆ ) ಇಟ್ಟ . ಚಕ್ರವಿರುವ ಆ ಮಂಜೂಷವನ್ನು ಎಳೆಯಲು ಸುಮಾರು ಐದು ಸಾವಿರ ಮಂದಿ ಬೇಕು . ಆ ಪರಮ ಪವಿತ್ರವಾದ ಶಿವ ಧನಸ್ಸನ್ನು ನ...