Posts

Showing posts from October, 2017

೧೦೧. ಮಂಗಳಂ

ರಾಮಚಂದ್ರಾಯ ಜನಕ ರಾಜಜಾ ಮನೋಹರಾಯ ಮಾಮಕಾಭೀಷ್ಟದಾಯ ಮಹಿತ ಮಂಗಳಂ || ಕೋಸಲೇಶಾಯ ಮಂದಹಾಸ ದಾಸ ಪೋಷಣಾಯ ವಾಸವಾದಿ ವಿನುತ ಸದ್ವರಾಯ ಮಂಗಳಂ || ಚಾರುಮೇಘರೂಪಾಯ ಚಂದನಾದಿ ಚರ್ಚಿತಾಯ ಹಾರಕಟಕ ಶೋಭಿತಾಯ ಭೂರಿ ಮಂಗಳಂ || ಲಲಿತರತ್ನ ಕುಂಡಲಾಯ ತುಲಸಿ ವನಮಾಲಾಯ ಜಲಜ ಸದೃಶ ದೇಹಾಯ ಚಾರು ಮಂಗಳಂ || ದೇವಕಿ ಸುಪುತ್ರಾಯ ದೇವದೇವೋತ್ತಮಾಯ ಭಾವಜ ಗುರುವರಾಯ ಭವ್ಯ ಮಂಗಳಂ || ಪುಂಡರಿಕಾಕ್ಷಾಯ ಪೂರ್ಣಚಂದ್ರವದನಾಯ ಆಂಡಜ ವಾಹನಾಯ ಅತುಲ ಮಂಗಳಂ || ವಿಮಲರೂಪಾಯ ವಿವಿಧ ವೇದಾಂತ ವೇದ್ಯಾಯ ಸುಮುಖಚಿತ್ತ ಕಾಮಿತಾಯ ಶುಭ್ರ ಮಂಗಳಂ || ರಾಮದಾಸಾಯ ಮೃದುಲ ಹೃದಯಕಮಲ ವಾಸಾಯ ಸ್ವಾಮಿ ಭದ್ರಗಿರಿವರಾಯ ಸರ್ವಮಂಗಳಂ ||                                  —— ಭದ್ರಚಲಂ ರಾಮದಾಸು ಸರ್ವಂ ಶಿವಂ ಸರ್ವೇಜನಾಃ ಸುಖಿನೋಭವಂತು

೧೦೦. ಪಟ್ಟಾಭಿಷೇಕ

ಭರತ ರಾಮನ ಪಾದಕ್ಕೆ ನಮಸ್ಕಾರ ಮಾಡಿ , " ಅಣ್ಣ , ಅಂದು ನನ್ನ ಅಮ್ಮ ಕೇಳಿದ ವರಗಳಿಗೆ ಅನುಸಾರವಾಗಿ ನೀನು ಕಾಡಿಗೆ ಹೋದೆ . ನಿನ್ನ ಪಾದುಕೆಗಳನ್ನು ಕೊಟ್ಟು ರಾಜ್ಯಭಾರ ಮಾಡಲು ಹೇಳಿದೆ . ನಿನ್ನದನ್ನು ನನಗೆ ಕೊಟ್ಟು ಸಂತೋಷಪಟ್ಟೆ . ಈಗ ನಾನು ನಿನ್ನದನ್ನು ನಿನಗೆ ವಾಪಸ್ಸು ಕೊಡುತ್ತಿದ್ದೇನೆ ಸ್ವೀಕರಿಸು " ಎಂದ . ರಾಮ ಸಂತೋಷವಾಗಿ ಸ್ವೀಕರಿಸಲು ಒಪ್ಪಿದ . ಶತ್ರುಘ್ನ , " ಅಣ್ಣಾ , ಕ್ಷೌರಿಕ ಬಂದಿದ್ದಾನೆ " ಎಂದ . " ತಂದೆಯ ಮಾತಿನಂತೆ ನಾನು ಅರಣ್ಯವಾಸಕ್ಕೆ ಹೋದೆ . ಆದರೆ ಯಾವುದೇ ಕಾರಣವಿಲ್ಲದೆ , ಕೇವಲ ನನ್ನ ಮೇಲಿನ ಪ್ರೀತಿಯಿಂದ , ನನ್ನ ಪಾದುಕೆಗಳನ್ನು ಸಿಂಹಾಸನದ ಮೇಲಿಟ್ಟು , ೧೪ ವರ್ಷಗಳಿಂದ ದೀಕ್ಷೆ ತೆಗೆದುಕೊಂಡಿರುವ ಭರತ ಮೊದಲು ದೀಕ್ಷೆಯನ್ನು ಬಿಟ್ಟು ಸ್ನಾನ ಮಾಡಲಿ " ಎಂದ . ಭರತ , ಶತ್ರುಘ್ನ , ಲಕ್ಷ್ಮಣ , ಸುಗ್ರೀವ , ವಿಭೀಷಣರ ಮಂಗಳಸ್ನಾನವಾದ ಮೇಲೆ ರಾಮ ಕ್ಷೌರ ಮಾಡಿಸಿಕೊಂಡು ಮಂಗಳ ಸ್ನಾನ ಮಾಡಿದ . ರೇಷ್ಮೆ ಧೋತ್ರವನ್ನುಟ್ಟು , ಸುವಾಸಿತ ದ್ರವ್ಯಗಳನ್ನು ಮೈಗೆ ಬಳೆದುಕೊಂಡು , ಹೆಗಲಿಗೆ ಶಲ್ಯವನ್ನು ಹಾಕಿಕೊಂಡು , ದಿವ್ಯಾಭರಣಗಳನ್ನು ಧರಿಸಿದ . ಕೌಸಲ್ಯೆ ಸೀತೆಗೆ ಮಂಗಳಸ್ನಾನ ಮಾಡಿಸಿದಳು . ವಾನರ ಸ್ತ್ರೀಯರಿಗೂ ಮಂಗಳ ಸ್ನಾನ ಮಾಡಿಸಿ ೯೦೦೦ ಆನೆಗಳ ಮೇಲೆ ಕೂರಿಸಿದರು ....

೯೯. ಮರಳಿ ಅಯೋಧ್ಯೆಗೆ

ಲ್ಲರೂ ಅಂದು ಲಂಕೆಯಲ್ಲೇ ವಿಶ್ರಮಿಸಿದರು. ಮರುದಿನ ಬೆಳಗ್ಗೆ ರಾಮ ವಿಭೀಷಣನಿಗೆ, “ನಾನು ಅಯೋಧ್ಯೆಗೆ ಬೇಗ ಹೋಗಿ ಸೇರಬೇಕು. ಕಾಲಿನಲ್ಲಿ ನಡೆದರೆ ತುಂಬಾ ಕಾಲವಾಗುತ್ತದೆ. ಬೇಗ ಹೋಗಲು ಏನಾದರೂ ಏರ್ಪಾಟು ಮಾಡುತ್ತೀಯಾ?” ಎಂದು ಕೇಳಿದ. ವಿಭೀಷಣ, “ನಮ್ಮ ಬಳಿ ಪುಷ್ಪಕ ವಿಮಾನವಿದೆ. ಉತ್ತರಕ್ಷಣದಲ್ಲಿ ಅದು ನಿಮ್ಮನ್ನು ಅಯೋಧ್ಯೆ ಕರೆದುಕೊಂಡು ಹೋಗುತ್ತದೆ. ಇಷ್ಟು ಕಷ್ಟ ಪಟ್ಟಿದ್ದೀರ. ಈಗ ಸೀತಮ್ಮ ಸಿಕ್ಕಿದ್ದಾಳೆ. ನೀವೂ ಸೀತೆಯಂತೆಯೇ ಅಭ್ಯಂಜನ ಸ್ನಾನ ಮಾಡಿ, ಒಳ್ಳೆಯ ಬಟ್ಟೆಯನ್ನು ಉಟ್ಟು ನಮ್ಮ ಉಡುಗೊರೆಗಳನ್ನು ಸ್ವೀಕರಿಸಿ ಹೋದರೆ ನಮಗೆ ತುಂಬಾ ಸಂತೋಷವಾಗುತ್ತದೆ” ಎಂದ. “ನನ್ನ ತಮ್ಮ ಭರತ ಅಲ್ಲಿ ನಾರು ಮಡಿಯುಟ್ಟು, ಜಟೆ ಕಟ್ಟಿಕೊಂಡು, ನನ್ನ ಪಾದುಕೆಗಳನ್ನು ಸಿಂಹಾಸನದ ಮೇಲಿಟ್ಟು, ನನಗಾಗಿಯೇ ಕಾಯುತ್ತಿದ್ದಾನೆ. ಅವನಿಗೆ ಮುಂಚೆ ನಾನು ರೇಷ್ಮೆಪಂಚೆಯುಡುವುದಿಲ್ಲ. ನನಗೆ ಬೇಗ ಅವನನ್ನು ನೋಡಬೇಕೆಂದಿದೆ.” ವಿಭೀಷಣ ತಕ್ಷಣ ಪುಷ್ಪಕ ವಿಮಾನದ ಏರ್ಪಾಟು ಮಾಡಿದ. ವಿಮಾನವನ್ನು ಹತ್ತಿ ರಾಮ, “ನೀವೆಲ್ಲ ನನಗಾಗಿ ತುಂಬಾ ದಣಿದ್ದೀರ. ವಿಶ್ರಾಂತಿ ಪಡಿಯಿರಿ. ನಾನು ಹೊರಡುತ್ತೇನೆ” ಎಂದಾಗ ವಾನರರೆಲ್ಲ, “ನಿಮ್ಮನ್ನು ಬಿಟ್ಟು ಇರಲಾಗುವುದಿಲ್ಲ. ನಾವೂ ನಿಮ್ಮ ಜೊತೆಯೇ ಅಯೋಧ್ಯೆಗೆ ಬರುತ್ತೇವೆ. ಅಲ್ಲಿ ಜಾಸ್ತಿ ದಿನವಿದ್ದು ನಿಮಗೆ ತೊಂದರೆ ಕೊಡುವುದಿಲ್ಲ. ನಿಮ್ಮ ತಾಯಿ ಕೌಸಲ್ಯೆಯನ್ನು ನೋಡಬೇಕೆಂದಿದೆ. ನೀವು ಪಟ್ಟಾಭಿಷಿಕ್ತರಾಗಿ ಸಿಂಹಾಸ...

೯೮. ದೇವತೆಗಳ ದರ್ಶನ

ಸೀತೆ ಅಗ್ನಿಗೆ ಧುಮುಕಿದ ತಕ್ಷಣ ದೇವತೆಗಳೆಲ್ಲ ಅಲ್ಲಿಗೆ ಬಂದರು. "ಎಂತಹ ಕೆಲಸ ಮಾಡಿದೆ ರಾಮ! ನೀನು ಸಾಕ್ಷಾತ್ ಮಹಾವಿಷ್ಣು. ಸೃಷ್ಟಿ, ಸ್ಥಿತಿ, ಲಯಗಳಿಗೆ ನೀನೇ ಕಾರಣ. ನೀನೇ ಪರಬ್ರಹ್ಮ. ಸೀತೆಯನ್ನು ಅಗ್ನಿಗೆ ಧುಮುಕು ಎಂದು ಹೇಗೆ ಹೇಳಿದೆ?" ಎಂದು ಪ್ರಶ್ನಿಸಿದರು. "ನೀವೆಲ್ಲರೂ ನನ್ನನ್ನು ದೊಡ್ಡವನು ಎನ್ನುತ್ತಿದ್ದೀರ. ಆದರೆ ನಾನು ಹಾಗೆ ಭಾವಿಸುತ್ತಿಲ್ಲ. ನಾನು ದಶರಥನ ಪುತ್ರ. ಮನುಷ್ಯ" - ರಾಮ ಉತ್ತರಿಸಿದ. ಅಷ್ಟರಲ್ಲಿ ಅಗ್ನಿಯಿಂದ ಅಗ್ನಿದೇವ ಸೀತೆಯನ್ನು ತನ್ನ ತೊಡೆಯಮೇಲೆ ಕೂರಿಸಿಕೊಂಡು ಬಂಗಾರದ ಸಿಂಹಾಸನದ ಮೇಲೆ ಹೊರಗೆ ಬಂದ. "ರಾಮ, ಇವಳು ಮಹಾ ಪತಿವ್ರತೆ. ಪುನೀತೆ. ಪುಣ್ಯಚಾರಿತ್ರ್ಯವುಳ್ಳವಳು. ಮನಸ್ಸಿನಿಂದಾಗಲೀ, ವಾಕ್ಕಿನಿಂದಾಗಲೀ ಇವಳಿಂದ ಯಾವ ದೋಷವೂ ನಡೆದಿಲ್ಲ. ಇವಳ ಪಾತಿವ್ರತ್ಯದಿಂದಲೇ ರಾಕ್ಷಸ ಸಂಹಾರ ನಡೆದಿದೆ. ಸರ್ವಕಾಲದಲ್ಲಿಯೂ, ಸರ್ವಾವಸ್ಥೆಯಲ್ಲಿಯೂ ನಿನ್ನ ನಾಮವನ್ನೇ, ನಿನ್ನ ಪಾದವನ್ನೇ ಸ್ಮರಿಸುವವಳು ಸೀತೆ. ನೀನು ಇವಳನ್ನು ಸ್ವೀಕರಿಸಲೇಬೇಕು" ಎಂದ. ರಾಮ ಸಂತುಷ್ಠನಾಗಿ, "ನೀವೆಲ್ಲ ನನಗೆ ಇಷ್ಟು ಹೇಳಬೇಕಿಲ್ಲ. ಸರ್ವಕಾಲದಲ್ಲಿಯೂ ಸೀತೆಯ ಮನಸ್ಸು ನನ್ನ ಮೇಲೆ ಇದೆ ಎಂದು ನನಗೆ ತಿಳಿದಿದೆ. ಸೀತೆಯನ್ನು ರಾವಣ ಎಂದಿಗೂ ಮುಟ್ಟಲಾರ. ಆದರೆ ಅದು ನನಗೆ ಗೊತ್ತು. ಸೀತೆಯ ಚಾರಿತ್ರ್ಯವನ್ನು ಲೋಕಕ್ಕೆ ತಿಳಿಸಬೇಕೆಂದು ಪತಿಯಾಗಿ ನಾನು ಹೀಗೆ ಮಾಡಿದೆ" ಎಂ...

೯೭. ಅಗ್ನಿಪ್ರವೇಶ

ಸೀತೆ ಸ್ನಾನ ಮಾಡಿ , ಅಲಂಕರಿಸಿಕೊಂಡ ಮೇಲೆ ಅವಳನ್ನು ಪಲ್ಲಕ್ಕಿಯಲ್ಲಿ ಕೂರಿಸಿಕೊಂಡು ರಾಮನ ಬಳಿ ಕರೆತಂದರು . ರಾಮನ ಮುಖದಲ್ಲಿ ದೈನ್ಯ , ಸಂತೋಷ , ಕೋಪ ಎಲ್ಲ ಭಾವನೆಗಳೂ ಒಟ್ಟಾಗಿ ಕಾಣಿಸುತ್ತಿದ್ದವು . " ನೀವು ಅವಳನ್ನು ಪಲ್ಲಕ್ಕಿಯಲ್ಲೇಕೆ ಕರೆತರುತ್ತಿದ್ದೀರಿ ? ಇಳಿಸಿ . ನಡೆದು ಬರಲಿ " ಎಂದ . ನಡೆದು ಬರುತ್ತಿದ್ದ ಸೀತೆಯನ್ನು ನೋಡಲು ವಾನರರು ಮುಗಿದುಬೀಳುತ್ತಿದ್ದರು . ಸುಗ್ರೀವ ಅವರನ್ನು ಹಿಂದೆ ಹೋಗಲು ಹೇಳಿದ . ರಾಮ , " ಇವಳಿಗಾಗಿಯೇ ಇವರು ಇಷ್ಟು ದಿನ ತಮ್ಮ ಪ್ರಾಣವನ್ನು ಒತ್ತೆಯಿಟ್ಟು ಯುದ್ಧಮಾಡಿದ್ದಾರೆ . ಈಗ ಅವಳು ಬರುತ್ತಿದ್ದಾಗ ಅವರನ್ನು ಹಿಂದೆ ನೂಕಿದರೆ ಹೇಗೆ ? ನೋಡಲಿ ಬಿಡಿ . ಪ್ರಿಯ ಬಂಧು ವಿಯೋಗವಾದಾಗ , ರಾಜ್ಯದಲ್ಲಿ ಕ್ಷೋಭೆಯಾದಾಗ , ಯುದ್ಧ ನಡೆಯುತ್ತಿದ್ದಾಗ ಅಂತಃಪುರದ ಸ್ತ್ರೀಯರು ಹೊರಗೆ ಬರಬಹುದು . ನಾನು ಇಲ್ಲೇ ಇದ್ದೇನೆ . ನಾನು ಪಕ್ಕದಲ್ಲಿರುವಾಗ ಸೀತೆಯನ್ನು ನೋಡುವುದರಲ್ಲಿ ಯಾವುದೇ ದೋಷವಿಲ್ಲ " ಎಂದ . ಹನುಮ , " ರಾಮಾ , ನಾವು ಯಾರಿಗಾಗಿ ಇಷ್ಟು ಕಷ್ಟ ಪಟ್ಟೆವೋ ಆ ಸೀತೆ ಇಂದು ನಿಮ್ಮ ಬಳಿ ಬಂದು ನಿಂತಿದ್ದಾಳೆ " ಎಂದ . ಸೀತೆ ಆನಂದದಿಂದ ಕಣ್ಣೀರಿಡುತ್ತ ರಾಮನನ್ನು , " ಆರ್ಯಪುತ್ರಾ " ಎಂದು ಕರೆದು ಅವನ ಮುಂದೆ ನಿಂತಳು . ರಾಮ ಹೇಳ...

೯೬. ಹನುಮ-ಸೀತೆಯರ ಭೇಟಿ

ಹನುಮ ಬಂದಾಗ ಸೀತೆ ಧ್ಯಾನ ಮಾಡುತ್ತಿದ್ದಳು . ಸ್ವಲ್ಪ ಹೊತ್ತಿನ ನಂತರ ಕಣ್ಣು ಬಿಟ್ಟು , " ನೀನು ಹನುಮ ಅಲ್ಲವೇ ?" ಎಂದು ಕೇಳಿದಳು . ಹನುಮ , " ಹೌದಮ್ಮ . ರಾಮ ಸುಗ್ರೀವ , ವಿಭೀಷಣರ ಸಹಾಯದಿಂದ ರಾವಣನನ್ನು ಸಂಹರಿಸಿದ . ವಿಭೀಷಣನನ್ನು ಲಂಕೆಗೆ ರಾಜನನ್ನಾಗಿ ಮಾಡಿದ್ದಾರೆ . ನೀನು ರಾಮನ ಸ್ನೇಹಿತನ ವನದಲ್ಲಿರುವುದರಿಂದ ನೀನು ಭಯ ಪಡುವ ಅವಶ್ಯಕತೆಯಿಲ್ಲ ಎಂದು ಹೇಳಿ ಕಳಿಸಿದ್ದಾರೆ ” ಎಂದ . " ಎಂತಹ ಒಳ್ಳೆಯ ವಾರ್ತೆ ಹೇಳಿದೆ ಹನುಮ " ಎಂದು ಹೇಳಿ ಸೀತೆ ಮೌನವಾದಳು . " ಏಕಮ್ಮಾ ಸುಮ್ಮನಾದೆ ?" " ಹತ್ತು ತಿಂಗಳಿಂದ ನಾನು ಈ ಮಾತು ಕೇಳಲೆಂದೇ ಕಾದಿದ್ದೆ . ಆಗ ನೀನು ಬಂದು ಹೇಳಿದಾಗ ತಕ್ಷಣಕ್ಕೆ ಬಾಯಿಯಿಂದ ಮಾತು ಹೊರಡಲಿಲ್ಲ . ನನಗೆ ತುಂಬಾ ಸಂತೋಷವಾಗಿದೆ . ನಾನು ನಿನಗೆ ಏನು ಕೊಡಲಿ . ಎಷ್ಟು ಬಂಗಾರ , ಮುತ್ತು , ರತ್ನಗಳು ಕೊಟ್ಟರೂ ಸಾಲದು . ಈಗ ನನ್ನ ಬಳಿ ಏನೂ ಇಲ್ಲ . ನೀನು ಮಧುರವಾಗಿ ಮಾತಾಡುತ್ತೀಯ . ನಿನಗೆ ಅಷ್ಟಾಂಗ ಯೋಗದಿಂದ ಕೂಡಿದ ಬುದ್ಧಿಯಿದೆ . ನಿನ್ನ ವೀರ್ಯ , ಪರಾಕ್ರಮ , ತೇಜಸ್ಸನ್ನು ನೋಡಿ ನನಗೆ ಹೆಮ್ಮೆಯಾಗುತ್ತಿದೆ ." " ಅಮ್ಮ , ನಿನ್ನ ಬಳಿ ಏನೂ ಇಲ್ಲವೆಂದು ಹೇಳಿದೆ . ಆದರೆ ನಾನು ಒಂದು ವರ ಕೇಳುತ್ತೇನೆ . ಹಿಂದೆ ನಾನು ಬಂದಿದ್...

೯೫. ಮಂಡೋದರಿಯ ಶೋಕ

ಮನುಷ್ಯ ಬದುಕಿರುವವರಿಗೂ ಮನಸ್ಸು ಒಂದು ರೀತಿಯಿರುತ್ತದೆ . ಅವನು ಸತ್ತ ಮೇಲೆ ಅದು ಇನ್ನೊಂದು ರೀತಿಯಾಗಿರುತ್ತದೆ . ರಾವಣ ಕೆಳಗೆ ಬಿದ್ದಾಗ ವಿಭೀಷಣ ಅಳುತ್ತಾ ಓಡಿ ಹೋಗಿ , " ಅಣ್ಣ , ನಾನು ಎಷ್ಟು ಹೇಳಿದರೂ ಅಹಂಕಾರದಿಂದ ನೀನು , ಇಂದ್ರಜಿತ್ತ , ಪ್ರಹಸ್ತ , ಕುಂಭಕರ್ಣ , ಅತಿಕಾಯ ಯಾರೂ ನನ್ನ ಮಾತು ಕೇಳಲಿಲ್ಲ . ಇಂದು ನೋಡು ಏನಾಗಿದೆ ! ನೀನಿದ್ದ ಕಾಲವೂ ಎಷ್ಟೋ ದಾನಗಳನ್ನು, ಯಜ್ಞಗಳನ್ನು ಮಾಡಿದೆ . ಮಿತ್ರಧರ್ಮದಿಂದ ಸ್ನೇಹಿತರಿಗೆ ಸಹಾಯ ಮಾಡಿದೆ . ಶತ್ರುಗಳಿಗೆ ಸಿಂಹಸ್ವಪ್ನನಾಗಿದ್ದೆ . ಆದರೆ ಇಂದು ಯಾರಿಗೂ ಬೇಡದವನಂತೆ ಭೂಮಿಯ ಮೇಲೆ ಸತ್ತು ಬಿದ್ದಿದ್ದೀಯ " ಎಂದು ಪ್ರಲಾಪಿಸಿದ . ರಾಮ ಅವನನ್ನು ಸಮಾಧಾನ ಮಾಡುತ್ತಾ , " ವಿಭೀಷಣ , ನಿನ್ನ ಅಣ್ಣ ಯುದ್ಧ ಮಾಡಲು ಹಿಂಜರಿಯಲಿಲ್ಲ . ಭಯಪಡಲಿಲ್ಲ . ಸಾಹಸದಿಂದಲೇ ಯುದ್ಧ ಮಾಡಿದ . ಒಬ್ಬ ವೀರ ಹೇಗೆ ಸಾಯಬೇಕೆಂದುಕೊಳ್ಳುತ್ತಾನೋ ಹಾಗೆಯೇ ಸತ್ತಿದ್ದಾನೆ " ಎಂದ . ಅಷ್ಟರಲ್ಲಿ ಅಂತಃಪುರದಿಂದ ರಾವಣನ ಸಾವಿರಾರು ಪತ್ನಿಯರು ಓಡಿ ಬಂದು , " ರಾವಣ ನೀನು ಹೋದೆ . ನಿನ್ನ ಜೊತೆ ನಮ್ಮ ಭೋಗ , ಭಾಗ್ಯಗಳೂ ಹೋದವು . ಅಷ್ಟು ಸಾಹಸ ಮಾಡಿಯೂ ಇಂದು ಒಬ್ಬ ಮನುಷ್ಯನ ಕೈಲಿ ಸತ್ತಿದ್ದೀಯ " ಎಂದು ಗೋಳಾಡಿದರು . ರಾವಣನ ಪಟ್ಟದರಾಣಿ ಮಂಡೋದರಿ ಅಳುತ್ತಾ ಅವನನ್...