Posts

Showing posts from September, 2017

೮೪. ಯುದ್ಧಾರಂಭ

ಯುದ್ಧ ಆರಂಭವಾಯಿತು. ವಾನರರು ಪ್ರಾಸಾದಗಳನ್ನು ಕೆಡವಿದರು. ಪರ್ವತಗಳನ್ನು ತಂದು ಎಸೆದರು. ಮರಗಳಿಂದ ಹೊಡೆದರು. ಲಂಕೆಯ ದ್ವಾರಗಳು ಮುಚ್ಚಿದ್ದವು. ಹೊರಗೆ ಯುದ್ಧ ನಡೆಯುತ್ತಿತ್ತು. ಮೊದಲ ದಿನದ ಯುದ್ಧದಲ್ಲಿ ವಾನರರು ವಿಶೇಷವಾದ ಬಲವನ್ನು ಪ್ರದರ್ಶಿಸಿದರು. ರಾಕ್ಷಸರು ಮುದ್ಗರ, ಶೂಲ, ತ್ರಿಶೂಲ, ಕತ್ತಿ, ಪರಿಘಗಳನ್ನು ವಾನರರ ಮೇಲೆ ಎಸೆದು, ಸತ್ತವರನ್ನು ತಿಂದುಬಿಡುತ್ತಿದ್ದರು. ಭಲ್ಲೂಕಗಳೂ ಸಿಕ್ಕ ಸಿಕ್ಕ ರಾಕ್ಷಸರನ್ನು ಹಿಡಿದು ತಿಂದುಬಿಡುತ್ತಿದ್ದವು. ಯುದ್ಧರಂಗದಲ್ಲಿ ಎಲ್ಲಿ ನೋಡಿದರೂ ಹಿಡಿ, ಹೊಡಿ, ಕೊಲ್ಲು ಎಂಬ ಮಾತುಗಳೇ ಕೇಳಿಸುತ್ತಿದ್ದವು. ರಾತ್ರಿಯೆಲ್ಲ ಭಯಂಕರವಾದ ಯುದ್ಧ ನಡೆಯಿತು. ತಲೆಗಳು ಚಂಡಿನಂತೆ ಆಕಾಶಕ್ಕೆ ಹಾರುತ್ತಿದ್ದವು. ಎಲ್ಲಿ ನೋಡಿದರೂ ಎದೆ, ಕಾಲು, ಕೈಗಳೇ ಕಾಣುತ್ತಿದ್ದವು. ಆ ಪ್ರದೇಶವೆಲ್ಲ ರಕ್ತದಿಂದ ತುಂಬಿ ನಡೆಯುತ್ತಿದ್ದವರ ಕಾಲುಗಳು ಜಾರುತ್ತಿದ್ದವು. ಆನೆಗಳ ಸೊಂಡಿಲುಗಳು, ಕಾಲುಗಳು, ಕುದುರೆಗಳ ಶರೀರ ಭಾಗಗಳು ಯುದ್ಧ ಭೂಮಿಯಲ್ಲಿ ಬಿದ್ದಿದ್ದವು. ಇಂತಹ ಸಮಯದಲ್ಲಿ ಇಂದ್ರಜಿತ್ತ ಯುದ್ಧಕ್ಕೆ ಬಂದ. ಅವನನ್ನು ನೋಡಿದ ಅಂಗದ ಉತ್ಸಾಹದಿಂದ ಒಂದು ಪರ್ವತ ಶಿಖರವನ್ನು ಅವನ ಮೇಲೆ ಎಸೆದ. ಆ ಏಟಿಗೆ ಇಂದ್ರಜಿತ್ತನ ರಥ, ಕುದುರೆ, ಧ್ವಜಗಳು ಮುರಿದವು. ಯಾರೂ ಊಹಿಸದ ದೃಶ್ಯವನ್ನು ನೋಡಿದ ರಾಮಲಕ್ಶ್ಮಣರು, ದೇವತೆಗಳೂ ಆಶ್ಚರ್ಯಗೊಂಡರು. ಇಂದ್ರಜಿತ್ತನ ರಥ ಮುರಿದುದು ಅದೇ ಮೊದಲ ಬಾರಿ! ಕೋಪಗೊಂಡ ಇಂದ್ರಜಿತ್ತ ಆಕ...

೮೩. ಯುದ್ಧ ಸಿದ್ಧತೆಗಳು

ಸೀತೆಯ ಬಳಿ ನೇರವಾಗಿ ಬಂದ ರಾವಣ, “ಸೀತಾ, ನಿನ್ನ ಗಂಡ ಅಷ್ಟು ಶಕ್ತಿವಂತ ಎಂದು ಹೇಳುತ್ತಿದ್ದೆ! ಈಗ ನೋಡು ಏನಾಗಿದೆ. ರಾಮ ವಾನರರ ಜೊತೆ ಸೇರಿ ಸಮುದ್ರಕ್ಕೆ ಸೇತುವೆ ಕಟ್ಟಿ ಲಂಕೆಗೆ ಬಂದ. ಅವನು ದಕ್ಷಿಣ ತೀರದಲ್ಲಿ ಮಲಗಿದ್ದಾಗ, ಪ್ರಹಸ್ತನ ನಾಯಕತ್ವದಲ್ಲಿ ನಮ್ಮ ಸೈನ್ಯ ಹೋಗಿ ರಾಮ ಶರೀರದಿಂದ ತಲೆಯನ್ನು ಬೇರ್ಪಡಿಸಿದರು. ನಿದ್ದೆ ಹೋಗುತ್ತಿದ್ದ ವಾನರರನ್ನು ಕೊಂದುಬಿಟ್ಟರು. ಹನುಮ ದವಡೆಯಿಂದ ರಕ್ತ ಕಾರುತ್ತಾ ಸತ್ತುಬಿದ್ದ. ರಾಮ ಸತ್ತದ್ದನ್ನು ನೋಡಿ ಲಕ್ಷ್ಮಣ ಹೆದರಿ ಓಡಿಹೋದ. ಜಾಂಬವಂತ, ಸುಷೇಣ, ಗಂಧಮಾದನ, ಶತಬಲಿ, ಅಂಗದ ಮೊದಲಾದ ವೀರರೆಲ್ಲ ಸತ್ತಿದ್ದಾರೆ. ಮಿಕ್ಕವರನ್ನು ಸಮುದ್ರದಲ್ಲಿ ಬಿಸಾಕಿದ್ದೇವೆ. ಕೆಲವು ವಾನರರ ಜೊತೆ ಲಕ್ಷ್ಮಣ ಓಡಿಹೋಗಿದ್ದಾನೆ. ನಿನ್ನ ಗಂಡನ ತಲೆಯನ್ನು ನೋಡಿ ಸಂತೋಷಪಡು” ಎಂದು ಹೇಳಿ ಅಲ್ಲಿದ್ದ ರಾಕ್ಷಸ ಸ್ತ್ರೀಯರಿಗೆ ವಿದ್ಯುಜಿಹ್ವನನ್ನು ಕರೆಯಲು ಆದೇಶಿಸಿದ. ವಿದ್ಯುಜಿಹ್ವ ಬಂದು ರಾಮನ ತಲೆ, ಬಿಲ್ಲು-ಬಾಣಗಳನ್ನು ಸೀತೆಯ ಮುಂದಿಟ್ಟ. ಅದನ್ನು ನೋಡಿದ ಸೀತೆ ಮೂರ್ಛೆಹೋದಳು.   “ಸೀತಾ ಈಗಲಾದರೂ ನೀನು ನನ್ನ ಬಳಿ ಬರುತ್ತೀಯಾ?” ಎಂದ ರಾವಣ. ಸೀತೆ ವಿದ್ಯುಜಿಹ್ವ ತಂದ ತಲೆಯನ್ನು ಅದು ರಾಮನದೋ ಅಲ್ಲವೋ ಎಂದು ಪರೀಕ್ಷಿಸಿದಳು. ಅದು ರಾಮನ ಶಿರಸ್ಸಿನಂತೆಯೇ ಇತ್ತು. ಸೀತೆಯ ಎದೆಯೊಡೆಯಿತು. “ರಾಮ, ನನಗೆ ಸೌಭಾಗ್ಯವಿದೆಯೆಂದು, ನೀನು   ದೀರ್ಘಾಯುಷಿಯೆಂದು ಜ್ಯೋತಿಷಿಗಳು ಹೇಳಿದ್ದರು. ಆದರೆ ಇಂ...

೮೨. ಗೂಢಚರ್ಯ

ನಲ ಸೇತು ನಿರ್ಮಾಣವನ್ನು ಪ್ರಾರಂಭಿಸಿದ . ಸಂತೋಷದಿಂದ ವಾನರರು ಹತ್ತಿರವಿದ್ದ ಬೆಟ್ಟ ಗುಡ್ಡಗಳನ್ನು ಹತ್ತಿ ಕಲ್ಲುಗಳನ್ನು , ವಿವಿಧ ಮರಗಳನ್ನು ತೆಗೆದು ' ರಾಮನಿಗೆ ಜೈ ' ಎನ್ನುತ್ತಾ ಸಮುದ್ರದಲ್ಲಿ ಹಾಕತೊಡಗಿದರು . ಮೊದಲ ದಿನ ೧೪ ಯೋಜನಗಳಷ್ಟು ಸೇತುವೆ ನಿರ್ಮಾಣವಾಯಿತು . ಮುಂದಿನ ದಿನಗಳಲ್ಲಿ ಅದು ೨೦ , ೨೧ , ೨೨ , ೨೩ಕ್ಕೆ ಏರಿತು . ಒಟ್ಟು ಐದು ದಿನಗಳಲ್ಲಿ ಸೇತುವಿನ ನಿರ್ಮಾಣ ಮುಗಿಯಿತು . ರಾಮ ಎಲ್ಲರಿಗೂ ಸಮುದ್ರ ದಾಟುವಂತೆ ಆದೇಶಿಸಿದ .  ಕೆಲವರು ಸೇತುವಿನ ಅಂಚಿನಲ್ಲಿ , ಕೆಲವರು ಸಮುದ್ರದಲ್ಲಿ ಧುಮುಕಿ ಮತ್ತೆ ಮೇಲೆದ್ದು , ಇನ್ನೂ ಕೆಲವರು ಈಜುತ್ತಾ ಹೊರಟರು . ಕೆಲವರು ದೊಡ್ಡ ದೊಡ್ಡ ಮರಗಳನ್ನು ಸಮುದ್ರಕ್ಕೆ ಎಸೆದು ಅದರ ಮೇಲೆ ಕೂತು ಹೋದರು . ಸಮುದ್ರದ ಶಬ್ದ ಹೆಚ್ಚೋ , ವಾನರರ ಕೂಗು ಹೆಚ್ಚೋ ಎಂಬಂತೆ ಜೋರಾಗಿ ಕೂಗುತ್ತಿದ್ದರು . ಕೊಟ್ಯಾಂತರ ಮಂದಿಯ ವಾನರ ಸೈನ್ಯ ಲಂಕೆಯನ್ನು ಸೇರಿತು .  ರಾಮ ವಿಭೀಷಣನನ್ನು , ಸುಗ್ರೀವನನ್ನು ಕರೆದು , " ರಾವಣನ ರಾಯಭಾರಿಯಾಗಿ ಶುಕನೆಂಬುವವನು ಬಂದಿದ್ದನಲ್ಲವೇ ? ಅವನನ್ನು ಕರೆದುಕೊಂಡು ಬನ್ನಿ " ಎಂದ . ಅವನನ್ನು ರಾಮನ ಮುಂದೆ ಕರೆತಂದರು . ರಾಮ ಅವನು ಬಂದ ಕಾರಣ ಕೇಳಿದ . ಶುಕ , " ಬುದ್ಧಿಹೀನನಾದ ರಾವಣ ನಿಮ್ಮ ಬಲವನ್ನು ನೋಡಿ ಬರಲು ಹೇಳಿ...

೮೧. ರಾಮನ ತೀರ್ಪು

ಎಲ್ಲರ ಮಾತುಗಳನ್ನು ಕೇಳಿದ ರಾಮ ತನ್ನ ನಿರ್ಧಾರವನ್ನು ಹೇಳಿದ: "ಇಲ್ಲಿಯವರೆಗೂ ನೀವು ವಿಭೀಷಣನಲ್ಲಿ ದೋಷಗಳಿವೆಯೋ ಇಲ್ಲವೋ, ಅವನನ್ನು ಸೇರಿಸಿಕೊಳ್ಳಬೇಕೋ ಇಲ್ಲವೋ ಎಂಬುದರ ಬಗ್ಗೆ ಮಾತಾಡಿದ್ದೀರ. ಈಗ ನನ್ನ ಮಾತು ಕೇಳಿ. ನಾನು, ನನ್ನ ಬಳಿ ಬಂದು, 'ರಾಮ ನಾನು ನಿನ್ನವನು. ನನ್ನನ್ನು ಕಾಪಾಡು' ಎಂದು ಕೇಳಿಕೊಳ್ಳುವವನ ಗುಣದೋಷ ವಿಚಾರಣೆ ಮಾಡುವುದಿಲ್ಲ.  ಸಕೃದೇವ ಪ್ರಪನ್ನಾಯ ತವಾಸ್ಮೀತಿ ಚ ಯಾಚತೇ ಅಭಯಂ ಸರ್ವ ಭೂತೇಭ್ಯೋ ದದಾಮ್ಯೇತದ್ ವ್ರತಂ ಮಮ ಬಂದವನು ವಿಭೀಷಣನೇ ಆಗಲಿ, ರಾವಣನೇ ಆಗಲಿ ಶರಣಾದವನನ್ನು ರಕ್ಸಿಸುತ್ತೇನೆ. ವಾಸ್ತವದಲ್ಲಿ ಇಂತಹ ಯುದ್ಧ ನಡೆಯುವಾಗ ಎರೆಡು ರೀತಿಯವರಿಗೆ ರಾಜ್ಯದ ಮೇಲೆ ಆಸೆಯಿರುತ್ತದೆ. ಒಬ್ಬ: ಅದೇ ಕುಲದಲ್ಲಿ ಜನಿಸಿದವನು. ಇನ್ನೊಬ್ಬ: ಪಕ್ಕದ ರಾಜ್ಯದ ರಾಜ. ಈ ವಿಷಯಗಳಲ್ಲಿ ನಾವು ತಟಸ್ಥರು. ಆದರೆ ವಿಭೀಷಣನ ಬಳಿ ಈ ಕಾರಣಗಳಿವೆ. ಅದಕ್ಕಾಗಿ ಬಂದು ಶರಣಾಗಿದ್ದಾನೆ. ಸುಗ್ರೀವ, ಪ್ರಪಂಚದಲ್ಲಿ ಭರತನಂತಹ ತಮ್ಮ, ನನ್ನಂತಹ ಮಗ, ನಿನ್ನಂತಹ ಮಿತ್ರನಿರನು. ಆದ್ದರಿಂದ ಎಲ್ಲರನ್ನೂ ಅದೇ ತಕ್ಕಡಿಯಲ್ಲೇ ತೂಕ ಮಾಡಬೇಡ. ದುಷ್ಟನಾಗಲಿ, ಒಳ್ಳೆಯವನಾಗಲಿ ನನ್ನ ಆಶ್ರಯ ಕೋರಿದರೆ ನಾನು ರಕ್ಷಿಸುತ್ತೇನೆ. ಬ್ರಹ್ಮಾಂಡದ ಯಕ್ಷ, ಕಿನ್ನರ, ದಾನವ, ಗಂಧರ್ವ, ಪೃಥ್ವಿಯ ಸಮಸ್ತ ಭೂತಗಳು ನನ್ನ ಮೇಲೆ ಯುದ್ಧಕ್ಕೆ ಬಂದರೂ ಅವರನ್ನೆಲ್ಲ ಕೊಲ್ಲುತ್ತೇನೆ. ನಿನಗೆ ಒಂದು ಪೂರ್ವದ ಕಥೆ ಹೇಳುತ್ತನೆ ಕೇಳು: ಒಂದು...

೮೦. ಅಭಿಪ್ರಾಯಗಳು

ಮರುದಿನ ರಾವಣ ಸಭೆ ಸೇರಲು ಆದೇಶಿಸಿ ರಥವನ್ನು ಹತ್ತಿ ಸಭಾ ಮಂಟಪಕ್ಕೆ ಬಂದ. ಎಲ್ಲರೂ ಬಂದು ಕುಳಿತಮೇಲೆ, “ನಾನು ಸೀತೆಯನ್ನು ಅಪಹರಿಸಿರುವುದು ವಾಸ್ತವ. ಆ ಸಮಯದಲ್ಲಿ ಕುಂಭಕರ್ಣ ನಿದ್ದೆ ಹೋಗುತ್ತಿದ್ದರಿಂದ ಅವನಿಗೆ ನಾನು ಹೇಳಿಲ್ಲ. ಪ್ರಹಸ್ತ, ನೀನು ಹೋಗಿ ಕುಂಭಕರ್ಣನನ್ನು ಕರೆದುಕೊಂಡು ಬಾ” ಎಂದ. ಪ್ರಹಸ್ತ ಹೊರಟ ಮೇಲೆ ರಾವಣ ಸಭೆಯನ್ನುದ್ದೇಶಿಸಿ ಹೇಳಿದ: “ಮೂರು ಲೋಕದಲ್ಲಿಯೂ ಸೀತೆಯಷ್ಟು ಅಂದವಾದ ಸ್ತ್ರೀ ಇಲ್ಲ. ಪ್ರತಿದಿನವೂ ಅವಳ ಸಣ್ಣ ನಡುವನ್ನು ನೋಡಿದರೆ ನನ್ನ ಕಾಮ ಹೆಚ್ಚುತ್ತಿದೆ. ಕಾಮ ಹೆಚ್ಚಾಗುತ್ತಿರುವುದರಿಂದ ನನಗೆ ನೀರಸವಾಗುತ್ತಿದೆ (ರಾವಣ ಸೀತೆಯ ಕುರಿತು ಇನ್ನೂ ನೀಚವಾಗಿ ಮಾತಾಡುತ್ತಾನೆ. ಅದನ್ನು ಇಲ್ಲಿ ಬರೆಯುವುದು ಸಾಧ್ಯವಿಲ್ಲ). ಅವಳನ್ನು ಅಪಹರಿಸಿ ತಂದ ಮೇಲೆ, ‘ರಾಮ ಇಲ್ಲಿಗೆ ಬರಬಹುದು. ಒಂದು ವರ್ಷ ಕಾಯೋಣ’ ಎಂದಳು. ಒಂದು ವರ್ಷದವರೆಗೂ ಮಂಚ ಹತ್ತುವುದಿಲ್ಲವೆಂದಳು. ಹೋಗಲಿ ಎಂದು ಒಂದು ವರ್ಷದ ಕಾಲಾವಕಾಶ ಕೊಟ್ಟಿದ್ದೇನೆ.” ಅಷ್ಟರಲ್ಲಿ ಅಲ್ಲಿಗೆ ಬಂದಿದ್ದ ಕುಂಭಕರ್ಣ ಹೇಳಿದ: “ನೀನು ಮಾಡಿದ ಕೆಲಸ ತಪ್ಪು. ಈಗ ನಮ್ಮನ್ನು ಕರೆದು ಏನು ಮಾಡಬೇಕು ಎಂದು ಏಕೆ ಕೇಳುತ್ತೀಯ? ನೀನು ಸೀತೆಯನ್ನು ಅಪಹರಿಸುವ ಮುಂಚೆ ನಮ್ಮನ್ನು ಕೇಳಿದ್ದೆಯಾ? ರಾಜ ಯಾವುದೇ ಕೆಲಸ ಮಾಡುವ ಮೊದಲು ಯುಕ್ತಾಯುಕ್ತಗಳನ್ನು ಯೋಚಿಸಿ ನಿರ್ಧಾರ ಮಾಡಬೇಕು. ವಿಚಕ್ಷಣವಿಲ್ಲದೆ ನಿರ್ಣಯ ತೆಗೆದುಕೊಂಡರೆ, ಆ ನಿರ್ಣಯದಿಂದ ಹೊರಗಿನವರು ಪ್ರಯೋಜನ ಪಡೆಯ...

೭೯. ವಿಭೀಷಣನ ವಿವೇಚನೆ

ಅತ್ತ ಲಂಕೆಯಲ್ಲಿ ರಾವಣ ಮಂತ್ರಿಗಳ ಜೊತೆ ತಲೆ ತಗ್ಗಿಸಿ ಕುಳಿತಿದ್ದ. “ನಡೆಯಬಾರದ್ದು ನಡೆದಿದೆ. ನಾನು ಸೀತೆಯನ್ನು ಅಪಹರಿಸಿರುವುದು ನಿಮಗೆ ಗೊತ್ತಿರುವ ಸಂಗತಿ. ರಾಮ ನನ್ನ ಮೇಲೆ ಯುದ್ದಕ್ಕೆ ಬರುತ್ತಿದ್ದಾನೆ. ಹನುಮಂತನೊಬ್ಬನೇ ಇಲ್ಲಿಗೆ ಬಂದು ಲಂಕೆಯನ್ನು ಧ್ವಂಸ ಮಾಡಿದ್ದು ನಿಮಗೇ ತಿಳಿದಿದೆ. ಈ ಮಾತು ಹೇಳಲು ನನಗೆ ನಾಚಿಕೆಯಾಗುತ್ತಿದೆ. ಗೂಢಾಚಾರರಿಂದ ಬಂದ ವಾರ್ತೆಯೇನೆಂದರೆ ರಾಮ ಸಮುದ್ರ ತೀರಕ್ಕೆ ಬಂದು ಸೇರಿದ್ದಾನೆ. ಹೇಗಾದರೂ ಮಾಡಿ ಸಮುದ್ರವನ್ನು ದಾಟುತ್ತಾನೆ. ನಾವು ರಾಮ, ಲಕ್ಷ್ಮಣ, ವಾನರರ ಜೊತೆ ಯುದ್ಧ ಮಾಡಬೇಕಾಗುತ್ತದೆ. ನೀವೆಲ್ಲ ಏಕಾಭಿಪ್ರಾಯವಾಗಿ ನಿರ್ಧಾರ ತಿಳಿಸಿ. ಮಂತ್ರಿಗಳು ಏಕಾಭಿಪ್ರಾಯವಾಗಿ ಹೇಳುವ ಮಾತು ಉತ್ತಮವಾದ ಮಾತು. ತಮ್ಮಲ್ಲಿ ಭೇದಗಳಿದ್ದರೂ, ಅವನ್ನು ಪಕ್ಕಕ್ಕಿಟ್ಟು ಹೇಳುವ ಮಾತು ಮಧ್ಯಮ ಮಾತು. ಮಂತ್ರಿಗಳೆಲ್ಲ ಬೆರೆ ಬೇರೆಯಾಗಿ ಹೇಳುವ ಮಾತು ಅಧಮವಾದ ಮಾತು. ಈಗ ನೀವು ನನಗೆ ಉತ್ತಮವಾದ ಮಾತು ಹೇಳಿ” ಎಂದ.   ಮಂತ್ರಿಗಳೆಲ್ಲ ಸೇರಿ, “ಪ್ರಭು ನೀವೆಕೆ ಇಷ್ಟು ತಲೆಕೆಡಿಸಿಕೊಳ್ಳುತ್ತಿದ್ದೀರ? ನೀವು ಹಿಮಾಲಯದಲ್ಲಿದ್ದ ಕುಬೇರನ ಮೇಲೆ ಯುದ್ಧ ಮಾಡಿ ಅವನನ್ನು ಓಡಿಸಿ ಪುಷ್ಪಕ ವಿಮಾನವನ್ನು ತಂದವರು. ಅವನಿದ್ದ ಮನೆಯಿಂದಲೇ ಅವನನ್ನು ಓಡಿಸಿ ಲಂಕೆಯನ್ನು ವಶಪಡಿಸಿಕೊಂಡವರು. ನಿಮ್ಮ ತಂಗಿ ಕುಂಭೀನಸಿಯ ಗಂಡ ಮಧುವನ್ನು ಓಡಿಸಿ ಅಲ್ಲಿಂದ ಅನೇಕ ವಸ್ತುಗಳನ್ನು ತಂದಿದ್ದೀರಿ. ಪಾತಾಳದಲ್ಲಿದ್ದ ನಾಗ, ತಕ್ಷಕ, ...

೭೮. ಸೈನ್ಯ ಹೊರಟಿತು

“ ಎಲ್ಲಾ ಸರಿ . ಆದರೆ ೧೦೦ ಯೋಜನಗಳ ಸಮುದ್ರವನ್ನು ದಾಟಿ ಯಾರು ಹೋಗುತ್ತಾರೆ? ನಮಗಿರುವ ಈ ವಾನರ ಸಮೂಹದ ಜೊತೆ ಸಮುದ್ರ ದಾಟುವುದು ಹೇಗೆ? ಅದರಲ್ಲಿ ಕ್ರೂರ ರಾಕ್ಷಸರು, ತಿಮಿಂಗಲಗಳು, ಮೊಸಳೆಗಳು ಇರುತ್ತವಲ್ಲವೇ?” ಎಂದು ರಾಮ ಯೋಚಿಸುತ್ತಿದ್ದಾಗ ಸುಗ್ರೀವ, “ರಾಮ ನೀನು ಯೋಚಿಸಬೇಡ. ನಿನ್ನ ಉತ್ಸಾಹ, ಪೌರುಷ, ಪರಾಕ್ರಮಗಳನ್ನು ಒಂದು ಬಾರಿ ಜ್ಞಾಪಿಸಿಕೊ. ನೀನು ಬಾಣ ಹಿಡಿದು ನಿಂತರೆ ನಿನ್ನ ಮುಂದೆ ನಿಲ್ಲುವವರು ಯಾರು? ನಿನಗೆ ಈ ಬ್ರಹ್ಮಾಂಡವನ್ನೇ ಆಳುವ ಶಕ್ತಿಯಿದೆ. ನೀನು ಆಜ್ಞೆ ಮಾಡಿದರೆ ನಿನ್ನ ಹಿಂದೆ ಬರಲು ಸಮಸ್ತ ವಾನರ ಸೈನ್ಯ ಸಿದ್ಧವಾಗಿದೆ. ಒಂದು ಬಾರಿ ವಾನರ ಸೈನ್ಯ ಲಂಕೆಯಲ್ಲಿ ಕಾಲಿಟ್ಟರೆ ರಾವಣನಿಗೆ ಏನೂ ಮಾಡಲಾಗುವುದಿಲ್ಲ. ಸಮುದ್ರ ದಾಟುವ ವಿಷಯದ ಮೇಲೆ ದೃಷ್ಠಿಯಿಡುವುದನ್ನು ಬಿಟ್ಟು ಮುಂದಿನ ದಾರಿಯನ್ನು ಉಪದೇಶಿಸು” ಎಂದ. ಸುಗ್ರೀವನ ಮಾತುಗಳಿಗೆ ಉತ್ಸಾಹಗೊಂಡು ರಾಮ, “ನಿಜವೇ! ನಾನು ಅಂದುಕೊಂಡರೆ ನನ್ನ ತಪಃಶ್ಶಕ್ತಿಯಿಂದ ಈ ವಾನರರನ್ನು ಸಮುದ್ರ ದಾಟಿಸುತ್ತೇನೆ. ನನ್ನ ಅಸ್ತ್ರಗಳಿಂದ ಸಮುದ್ರವನ್ನು ಇಂಗಿಸುತ್ತೇನೆ” ಎಂದು ಹೇಳಿ ಹನುಮನ ಕಡೆ ತಿರುಗಿ, “ಹನುಮಾ! ಆ ಲಂಕಾಪಟ್ಟಣದ ಬಲದ ಕುರಿತು ಹೇಳು. ಅಲ್ಲಿ ಎಷ್ಟು ಸೈನ್ಯವಿದೆ? ದ್ವಾರಗಳು, ಕೋಟೆಗಳು ಹೇಗಿವೆ?” ಎಂದು ಕೇಳಿದ. ಹನುಮ ಹೇಳಿದ: “ಸಮುದ್ರವನ್ನು ದಾಟಿ ಹೋದರೆ ತ್ರಿಕೂಟಾಚಲ ಪರ್ವತದ ಮಧ್ಯದಲ್ಲಿ ನಮಗೆ ಲಂಕೆ ಸಿಗುತ್ತದೆ. ಅದು ಶತೃಗಳಿಗೆ ದುರ್ಭ...

೭೭. ಮರಳಿ ಕಿಷ್ಕಿಂಧೆಗೆ

ಅತ್ತ ಕೆಲವು ರಾಕ್ಷಸರು ಸೀತೆಯ ಬಳಿಗೆ ಓಡಿಹೋಗಿ, "ನಿನ್ನ ಜೊತೆ ಮಾತಾಡಿದ ಕೆಂಪು ಮೂತಿಯ ಕೋತಿಯ ಬಾಲಕ್ಕೆ ರಾವಣ ಬೆಂಕಿ ಹಚ್ಚಿಸಿದ್ದಾನೆ" ಎಂದು ಹೇಳಿದರು. ಸೀತೆ ತಕ್ಷಣ ಅಗ್ನಿದೇವನನ್ನು ಪ್ರಾರ್ಥಿಸಿ, "ನಾನು ರಾಮನ ಸೇವೆ ಮಾಡಿದವಳೇ ಆದರೆ, ಯಾವಾಗಲೂ ನನ್ನ ಮನಸ್ಸು ರಾಮನ ಮೇಲೇ ಇರುವುದು ನಿಜವೇ ಆದರೆ, ರಾಮನ ಮೇಲಿನ ನನ್ನ ಪ್ರೀತಿ ನಿಜವೇ ಆದರೆ, ಸುಗ್ರೀವನ ನನ್ನನ್ನು ರಾಮನ ಜೊತೆ ಸೇರಿಸುವುದು ನಿಜವೇ ಆದರೆ, ಹನುಮನ ಬಾಲಕ್ಕೆ ಹಚ್ಚಿದ ಬೆಂಕಿ ಶಾಂತವಾಗಲಿ" ಎಂದು ಬೇಡಿಕೊಂಡಳು. ತಕ್ಷಣವೇ ಹನುಮನ ಬಾಲಕ್ಕೆ ಹಚ್ಚಿದ ಬೆಂಕಿ ನಂದಿತು! ಹನುಮ, ‘ನಾನು ಬರುತ್ತಿದ್ದಾಗ ಮೈನಾಕ ಅತಿಥ್ಯ ಕೊಟ್ಟ. ಸಮುದ್ರ ನಮಸ್ಕಾರ ಮಾಡಿದ. ರಾಮ, ಸೀತೆಯರ ಹೆಸರು ಹೇಳಿದರೆ ಪಕೃತಿಯಲ್ಲಿ ಉಪಕರಿಸದಿರುವ ವಸ್ತು ಏನಿದೆ? ನನ್ನ ತಂದೆ ಅಗ್ನಿಯ ಸ್ನೇಹಿತ. ಆದ್ದರಿಂದಲೇ ನನಗೆ ಉಪಕಾರ ಮಾಡಿದ್ದಾನೆ. ಈ ಲಂಕಾಪಟ್ಟಣವನ್ನು ಸುಟ್ಟು ನನಗೆ ಉಪಕಾರ ಮಾಡಿದ ಅಗ್ನಿದೇವನಿಗೆ ಸಂತರ್ಪಣ ಮಾಡಿ ಹೋಗುತ್ತೇನೆ’ ಎಂದುಕೊಂಡ. ಮೊದಲು ಪ್ರಹಸ್ತನ ಮನೆಗೆ ಬೆಂಕಿಬಿತ್ತು. ನೋಡನೋಡುತ್ತಲೇ ಲಂಕೆಯ ಮನೆ ಮನೆಗೂ ಬೆಂಕಿ ಹರಡಿತು. ರಾವಣ ಪ್ರವರ್ತನೆಯಿಂದ ಅಷ್ಟುದಿನ ಬೇಸತ್ತಿದ್ದ ಅಷ್ಟದಿಕ್ಪಾಲಕರು ಸಂತೋಷಪಟ್ಟರು. ಹನುಮ ಬೆಂಕಿಯಿಡುವುದೇ ತಡ, ಅಗ್ನಿ ಸುಟ್ಟುಬಿಡುತ್ತಿದ್ದ. ವಾಯು ಜೋರಾಗಿ ಬೀಸಿ ಅಗ್ನಿಯನ್ನು ಹರಡುತ್ತಿದ್ದ. ಕೆಲವು ಕಡೆ ಹರಿಸಿನ ಬಣ್ಣದಲ್ಲಿ, ಕ...

೭೬. ಬಂಧನ

ರಾವಣ ತುಂಬಾ ಯೋಚಿಸಿ ಸಭೆಯಲ್ಲಿದ್ದ ತನ್ನ ಕಿರಿಯ ಮಗನಾದ ಅಕ್ಷಕುಮಾರನ ಕಡೆ ನೋಡಿದ . ತಂದೆ ನೋಡಿದ ತಕ್ಷಣ ಅಕ್ಷಕುಮಾರ ಮೇಲಕ್ಕೆದ್ದು , ಸಂತೋಷದಿಂದ ಯುದ್ಧಕ್ಕೆ ಹೋದ . ಇನ್ನೂ ಚಿಕ್ಕವನಾದ ಅಕ್ಷನನ್ನು ನೋಡಿದ ಹನುಮ , ' ಇವನು ಎಷ್ಟು ಚೆನ್ನಾಗಿದ್ದಾನೆ ! ಚಿಕ್ಕವನಾದರೂ ಅಗ್ನಿಯಂತೆ ಪ್ರಜ್ವಲಿಸುತ್ತಿದ್ದಾನೆ . ಇವನನ್ನು ಸ್ವಲ್ಪ ಹೊತ್ತು ಯುದ್ಧ ಮಾಡಲು ಬಿಡೋಣ ' ಎಂದುಕೊಂಡು ಅಕ್ಷ ಬಿಟ್ಟ ಬಾಣಗಳಿಂದ ತಪ್ಪಿಸಿಕೊಂಡು ಸೂಕ್ಶ್ಮ ರೂಪದಿಂದ ಅವನಿಗೆ ಕಾಣದಂತೆ ತಿರುಗುತ್ತಿದ್ದ . ಆದರೂ ಅಕ್ಷ ಹನುಮನ ಶರೀರದ ತುಂಬ ಬಾಣಗಳನ್ನು ಬಿಟ್ಟ . ಹನುಮ , ' ಇವನ ಯುದ್ಧವನ್ನು ನೋಡಿದರೆ ದೇವತೆಗಳೂ ಸಂತೋಷವಾಡುತ್ತಾರೆ . ಆದರೆ ಇನ್ನು ಸುಮ್ಮನಿದ್ದರೆ ಆಗುವುದಿಲ್ಲ ' ಎಂದುಕೊಂಡು ಆಕಾಶಕ್ಕೆ ಎಗರಿ ಅವನ ಮೇಲೆ ಬಿದ್ದ . ಅಕ್ಷನ ರಥ , ಸಾರಥಿ ಸತ್ತರು. ಆದರೂ ಅಕ್ಷ ಆಕಾಶದಲ್ಲಿ ನಿಂತು ಯುದ್ಧ ಮಾಡಲು ಆರಂಭಿಸಿದ . ಹನುಮ ಅವನನ್ನು ಆಕಾಶದಿಂದ ಎತ್ತಿ ಕೆಳಕ್ಕೆ ಬಿಸಾಡಿದಾಗ ಅಕ್ಷ ತಲೆ ಒಡೆದು ಸತ್ತುಬಿದ್ದ . ತನ್ನ ಮಗನ ಸಾವನ್ನು ಕೇಳಿ ರಾವಣನಿಗೆ ಮೊದಲ ಬಾರಿ ಸೋಲು , ಭಯಗಳು ಒಮ್ಮೆಲೇ ಉಂಟಾದವು . ಇನ್ನು ಯಾರನ್ನು ಕಳಿಸಬೇಕೆಂಬುದು ತಿಳಿಯದೆ ಕೊನೆಗೆ ಇಂದ್ರಜಿತ್ತನ ಕಡೆ ನೋಡಿ , " ನಿನ್ನನ್ನು ಕಳಿಸಬಾರದು . ಆದರೆ ...